ಚಿತ್ರ: ಮಿಲನ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ
ಗಾಯನ: ಕುನಾಲ್ ಗಾಂಜಾವಾಲ

ಕಿವಿ ಮಾತೊಂದು
ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಹಸಿರಾಗಿದೆ ದೀಪವು ನಿನಗಾಗಿ
ನಸು ನಗುತಲೆ ಸಾಗು ನೀನು ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ

ಕಿವಿ ಮಾತೊಂದು
ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು!

ಬಾಗಿಲಿನಾಚೆಗೆ ತಾ ಬಂದು
ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು ..
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ
ನೊಡಲೆ ಬೇಕು ನೀ ಬಂದು!

ಕಿವಿ ಮಾತೊಂದು
ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನೆಯ ಬಾಳಿನ ಸಂಗೀತ
ಹಾಡಲೆ ಬೇಕು ನೀನಿಲ್ಲಿ ..
ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನೆಯ ಪಾಲಿನ ಈ ಆಟ 
ಆಡಲೆ ಬೇಕು ನೀನೀಗ!

ಕಿವಿ ಮಾತೊಂದು
ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಹಸಿರಾಗಿದೆ ದೀಪವು ನಿನಗಾಗಿ
ನಸು ನಗುತಲೆ ಸಾಗು ನೀನು ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ

ಕಿವಿ ಮಾತೊಂದು
ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

Category: ಕನ್ನಡ ಚಿತ್ರಸಾಹಿತ್ಯ
Category: ಮಿಲನ ಚಿತ್ರ
Category: ಜಯಂತ್ ಕಾಯ್ಕಿಣಿ ಸಾಹಿತ್ಯ
Category:Kannada